ಶ್ರೀ ತುಳಜಾ ಭವಾನಿ ಕಂಬೈನ್ಸ್ ಲಾಂಛನದಲ್ಲಿ ಶ್ಯಾಮ್ ಮುಕುಂದನವಲೆ ನಿರ್ಮಿಸಿರುವ ಸಂಗೀತ ಶಾರದೆಯ ಒಲುಮೆಯ ಪಡೆದಿದ್ದ ಗಾನಯೋಗಿ, ಶಿವಯೋಗಿ ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ ಆಧಾರಿತ ಚಿತ್ರ ಶಿವಯೋಗಿ ಪುಟ್ಟಯ್ಯಜ್ಜ ಈ ವಾರ ರಾಜ್ಯಾದ್ಯಂತ ಬಿಡುಗಡೆ ಕಾಣುತ್ತಿದೆ. ಹಂಸವಿಜೇತ ನಿರ್ದೇಶಿಸಿರುವ ಈ ಚಿತ್ರಕ್ಕೆ ಅಮರಪ್ರಿಯ ಸಂಗೀತ, ಸತೀಶ್ಚಂದ್ರ, ಬೆಳಮಂಗಲ ಛಾಯಾಗ್ರಹಣ, ಉಮೇಶ್ ಪುರಾಣಿಕೆ ಮಠ್ ಕಥೆ, ಚಿತ್ರಕಥೆ, ಸಂಭಾಷಣೆ, ಅಮಿತ್ ಜವಳ್ಕರ್ ಸಂಕಲನ, ರಂಜಿತ್ ನೃತ್ಯ ನಿರ್ದೇಶನವಿದೆ. ವಿಜಯ ರಾಘವೇಂದ್ರ, ಶೃತಿ, ಅನು ಪ್ರಭಾಕರ್, ಅಭಿಜಿತ್, ಶಶಿಕುಮಾರ್, ಶಂಕರಲಿಂಗ ಸುಗ್ನಳ್ಳಿ, ಉಮೇಶ್ ನವಲೆ, ಭವ್ಯಶ್ರೀ ರೈ, ರಮಾನಂದ ನಾಯಕ್ ತಾರಾಗಣವಿದೆ.